ನಾಳೆ ಏನಿಹುದೋ..??

ಭಾವಯಾನದಲಿ ಕರಿ‌ಮೋಡಗಳ‌ ಸಂಘರ್ಷ.. 
ಸಿಟ್ಟ ಸುಡಲು‌ ಸೀಳಿ ಬರುತಿದೆ ಜ್ವಾಲೆಯ ನಿಷ್ಕರ್ಷ..
ಬಿರಿವ ಸಿಡಿಲಿನ ಹೊಡೆತಕೆ ಅಂಜುವುದೆ ಆಕಾಶ..
ಮತ್ತದೆ ನಿಶ್ಚಲತೆಗೆ ಮುಖವೊಡ್ಡಲಿಹುದು ಅವಕಾಶ..


ಹರಿವ‌ ನೀರೊಳಗೆ ಹರಿದು ತೇಲುವ ಬದುಕು..
ನಾಳೆ ಏನಿಹುದೊ‌; ನಿನ್ನೆ ಯಾರದೋ; ಪ್ರಶ್ನೆಗಳ ಸರಕು..
ಇಂದು ಕಾಡುತಿದೆ ನಿನ್ನೆ ಕಳೆದವರ ನೆನಪುಗಳ ಮೆಲುಕು..
ಕಳೆದು ಪಡೆದುದರ ಲಾಭ ನಷ್ಟಗಳ‌ ಇಲ್ಲೆ ಹುಡುಕು...


ನಿಂತ ನೆಲದೊಳಗಿನ ಕುದಿಯಲ್ಲಿ ಕರಗದು ಇಬ್ಬನಿ..
ಜಗದ ಸೃಷ್ಟಿಯ ಮಾಯೆಯೇ ಎಲ್ಲೆಡೆ ಮಾರ್ದನಿ..
ನಗುವ ಹರಡುತ್ತ ಈ ನಾಲ್ಕು ದಿನದಲ್ಲಿ ಸಾಗು ನೀ..


ಸುಡುವ ಸೂರ್ಯಕಾಂತಿಗಿದೆ ಸಂಜೆ ತಂಪೆರೆವ ಗುಣ..
ಜಡಿಮಳೆಯೂ ಸೋನೆ ಸೂಸಿ‌ ನೀಡುವಳು ಔತಣ..
ಕಾಲನ ಮುಂದೆ ಎಲ್ಲರ ಆಟಗಳೂ ಗೌಣ..
ಎಲ್ಲ ಆಡಿಸುತಿಹನು ಬಂದು ಹೋಗೋ ಕಾಂಚಾಣ..
                                          
           
                                              - ಭಾವವಾಹಿನಿ


Comments

Post a Comment

Popular posts from this blog

ರಿಚರ್ಡ್ ಆಂಟೋನಿಯಾಗಿ ಮತ್ತೆ ಬಂದ ರಕ್ಷಿತ್ ಶೆಟ್ಟಿ

PYRAMID VALLY